ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ
ಬಡತನದಲ್ಲಿ ಬೆಳೆದ ಬಾಲಕ ಈಗ ಚಂದ್ರಯಾನ-3 ತಂಡದಲ್ಲಿರುವ ಯುವ ವಿಜ್ಞಾನಿ; ಜಾರ್ಖಂಡ್ನ ಯುವಕನ ಸಾಧನೆಗೆ ಚಪ್ಪಾಳೆ
ಕೆ ಭರತ್ ಕುಮಾರ್ ಎಂಬ ಭರತ್, ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಬಡತನದಿಂದ ಬಂದ ಹುಡುಗ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು ಈಗ ಚಂದ್ರಯಾನ-3 ಮಿಷನ್ ನ ಭಾಗವಾಗಿದ್ದಾನೆ ಎಂದು ಕೇಳುವಾಗ ಹೆಮ್ಮೆ ಎನಿಸುತ್ತದೆ
- Rashmi Kallakatta
- Updated on: Sep 19, 2023
- 1:53 pm
ಚಂದ್ರಯಾನ-3 ಯಶಸ್ಸಿಗೆ ಮೋದಿಯನ್ನು ಪ್ರಶಂಸಿಸಿದ ದಕ್ಷಿಣ ಆಫ್ರಿಕಾದ ಪತ್ರಿಕೆ; ಪ್ರಧಾನಿಯ ಫೋಟೊ ಟ್ವೀಟ್ ಮಾಡಿದ ಜೈಶಂಕರ್
ಬಾಹ್ಯಾಕಾಶ ವಿಜ್ಞಾನದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದಾಗ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿದ್ದರು. " India's Modi out of this world, ಎಂದು ದಕ್ಷಿಣ ಆಫ್ರಿಕಾದ 'ದಿ ಸ್ಟಾರ್' ಪತ್ರಿಕೆಯ ಶೀರ್ಷಿಕೆ ನೀಡಿದೆ. ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯ ನಂತರ ಪ್ರಧಾನಿ ಮೋದಿ ಖುಷಿಯಾಗಿದ್ದಾರೆ. ವಿಶ್ವದಾದ್ಯಂತದ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯರೊಂದಿಗೆ ಅಕ್ಷರಶಃ ಚಂದ್ರನ ಮೇಲೆ ತಲುಪಿದೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ.
- Rashmi Kallakatta
- Updated on: Sep 19, 2023
- 1:53 pm
2024ರ ಚುನಾವಣೆಗೆ ಮುಂಚಿತವಾಗಿ ಹೊಸ ಅಪ್ಲಿಕೇಶನ್ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು ಬಿಜೆಪಿ ಸಿದ್ಧತೆ
ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದಲ್ಲಿ ಹೆಚ್ಚಿವೆ. ಇದರ ಪರಿಣಾಮವಾಗಿ, ಭಾರತದಾದ್ಯಂತ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿನ ನಾಗರಿಕರನ್ನು ಓಲೈಸಲು ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರೀಕರಿಸಲು ತನ್ನ ಸಾಮಾಜಿಕ ಮಾಧ್ಯಮ ಕಾರ್ಯತಂತ್ರವನ್ನು ನವೀಕರಿಸಲು ಪಕ್ಷ ನಿರ್ಧರಿಸಿದೆ.
- Rashmi Kallakatta
- Updated on: Aug 24, 2023
- 7:10 pm
ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ ಎಂದು ವಿವರಿಸಿದ ಇಸ್ರೋ ಮುಖ್ಯಸ್ಥ
Chandrayaan-3:ಕ್ಷುದ್ರಗ್ರಹ ಅಥವಾ ಇತರ ವಸ್ತುಗಳು ಭಾರೀ ವೇಗದಲ್ಲಿ ಹೊಡೆದರೆ, ಲ್ಯಾಂಡರ್ ಮತ್ತು ರೋವರ್ ಎರಡೂ ನಾಶವಾಗುತ್ತವೆ. ನೀವು ಚಂದ್ರನ ಮೇಲ್ಮೈಯನ್ನು ನೋಡಿದರೆ ಗೊತ್ತಾಗುತ್ತದೆ. ಇದು ಬಾಹ್ಯಾಕಾಶ ವಸ್ತುಗಳ ಹೊಡೆತದಿಂದ ಉಂಟಾಗುವ ಗುರುತುಗಳಿಂದ ತುಂಬಿರುತ್ತದೆ. ಭೂಮಿಯಲ್ಲೂ, ಪ್ರತಿ ಗಂಟೆಗೆ ಲಕ್ಷಗಟ್ಟಲೆ ಬಾಹ್ಯಾಕಾಶ ವಸ್ತುಗಳು ಬರುತ್ತವೆ, ಆದರೆ ನಮ್ಮ ವಾತಾವರಣವು ಎಲ್ಲವನ್ನೂ ಸುಡುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ ಎಂದು ಸೋಮನಾಥ್ ಹೇಳಿದರು.
- Rashmi Kallakatta
- Updated on: Aug 24, 2023
- 6:23 pm
ಚಂದ್ರನ ಮೇಲ್ಮೈಯಲ್ಲಿ ಇಸ್ರೋ ಲೋಗೊ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರ; ವೈರಲ್ ಫೋಟೊ ಫೇಕ್
Fact Check: ಚಂದ್ರನ ಮೇಲ್ಮೈಯಲ್ಲಿ ರಾಷ್ಟ್ರೀಯ ಲಾಂಛನದ ಚಿತ್ರ, ಇಸ್ರೋ ಲೋಗೊ ಮುದ್ರೆ ಹೀಗೆ ಅಚ್ಚೊತ್ತಿದೆ ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಶೇರ್ ಮಾಡುತ್ತಿರುವ ಈ ಚಿತ್ರ ಫೋಟೋಶಾಪ್ ಮಾಡಿದ್ದು. ಇಂಥಾ ಯಾವುದೇ ಫೋಟೊವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಹಂಚಿಕೊಂಡಿಲ್ಲ. ಈ ಚಿತ್ರದ ಫ್ಯಾಕ್ಟ್ ಚೆಕ್ ಇಲ್ಲಿದೆ.
- Rashmi Kallakatta
- Updated on: Aug 24, 2023
- 5:15 pm
6 ದೇಶಗಳನ್ನು ಆಹ್ವಾನಿಸಲು ನಿರ್ಧರಿಸಿದ ಬ್ರಿಕ್ಸ್; ಇದು ಗುಂಪನ್ನು ಬಲಪಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ವಿಸ್ತರಣೆಯನ್ನು ಭಾರತ ಯಾವಾಗಲೂ ಸಂಪೂರ್ಣವಾಗಿ ಬೆಂಬಲಿಸುತ್ತದೆ.ಹೊಸ ಸದಸ್ಯರು ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತಾರೆ ಎಂದು ನಂಬುತ್ತೇನೆ ಎಂದಿದ್ದಾರೆ. ವಿಸ್ತರಣಾ ಪ್ರಕ್ರಿಯೆಯಲ್ಲಿ ಭಾರತದ ಪ್ರಯತ್ನಗಳು ಪಾಲುದಾರರ ಸೇರ್ಪಡೆಯ ಮೇಲೆ ಕೇಂದ್ರೀಕರಿಸಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಭಾರತವು ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿಲ್ಲದ ಹೊಸ ಪ್ರವೇಶಗಳಲ್ಲಿ ಇಥಿಯೋಪಿಯಾ ಮಾತ್ರ ಒಂದಾಗಿದೆ.
- Rashmi Kallakatta
- Updated on: Aug 24, 2023
- 3:27 pm
ಭಾರತದ ಚಂದ್ರಯಾನ ಬಗ್ಗೆ ಕೊಂಕು ನುಡಿದ ಬಿಬಿಸಿ ಆಂಕರ್; ಆನಂದ್ ಮಹೀಂದ್ರಾ ಖಡಕ್ ಪ್ರತಿಕ್ರಿಯೆ
ಕೆಲವರು ಈ ಬಗ್ಗೆ ಯೋಚಿಸುತ್ತಿರುವ ಕಾರಣ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಭಾರತ, ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿರುವ ದೇಶ, ಸಾಕಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ 700 ಮಿಲಿಯನ್ಗಿಂತಲೂ ಹೆಚ್ಚು ಭಾರತೀಯರಿಗೆ ಶೌಚಾಲಯವಿಲ್ಲ. ನಿಜವಾಗಿಯೂ ಅವರು ಈ ರೀತಿಯ ಹಣವನ್ನು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಬೇಕೇ ಎಂದು ಬಿಬಿಸಿ ಸುದ್ದಿ ನಿರೂಪಕ ಹೇಳಿದ್ದಾರೆ.
- Rashmi Kallakatta
- Updated on: Aug 24, 2023
- 2:10 pm
‘ಮತ ಚಲಾಯಿಸುವಾಗ ಜೈ ಬಜರಂಗ ಬಲಿ ಎಂದು ಇವಿಎಂ ಗುಂಡಿ ಒತ್ತಿ’; ಮೋದಿ ಹೇಳಿಕೆಗೆ ಪಂಜಾಬ್ನಲ್ಲಿ ದೂರು
ಕರ್ನಾಟಕದ ಚುನಾವಣಾ ರ್ಯಾಲಿಗಳಲ್ಲಿ ಇವಿಎ ಗುಂಡಿಯನ್ನು ಒತ್ತುವ ಮೂಲಕ ರಾಜಕೀಯಕ್ಕೆ ಧರ್ಮ ಬೆರೆಸಿ ಜೈ ಬಜರಂಗ ಬಲಿ ಘೋಷಣೆ ಕೂಗುವಂತೆ ಮತದಾರರನ್ನು ಪ್ರಧಾನಿ ಒತ್ತಾಯಿಸಿದ್ದಾರೆ ಎಂದು ನಿಯೋಗ ದೂರಿನಲ್ಲಿ ಉಲ್ಲೇಖಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ವಿಡಿಯೊ ರೆಕಾರ್ಡಿಂಗ್ನ ತುಣುಕನ್ನೂ ದೂರಿನೊಂದಿಗೆ ನೀಡಲಾಗಿದೆ. ಈ ವಿಷಯವನ್ನು ಹೋಶಿಯಾರ್ಪುರ ಪೊಲೀಸರು ಪಂಜಾಬ್ ಪೊಲೀಸ್ನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
- Rashmi Kallakatta
- Updated on: Aug 24, 2023
- 1:10 pm
BRICS Summit: ರಾಷ್ಟ್ರಧ್ವಜಕ್ಕೆ ಗೌರವ; ಬ್ರಿಕ್ಸ್ ಶೃಂಗಸಭೆ ವೇಳೆ ನೆಲದಲ್ಲಿ ಬಿದ್ದಿದ್ದ ತ್ರಿವರ್ಣ ಧ್ವಜವನ್ನು ಎತ್ತಿ ಜೇಬಿಗೆ ಹಾಕಿದ ಪ್ರಧಾನಿ ಮೋದಿ
PM Modi Picks Up Tiranga: ಗ್ರೂಪ್ ಫೋಟೊಗಾಗಿ ವಿಶ್ವ ನಾಯಕರು ನಿಲ್ಲುವ ಸ್ಥಾನವನ್ನು ಗುರುತಿಸಲು ಧ್ವಜಗಳನ್ನು ಅಲ್ಲಿ ಗುರುತಿಗೆ ಎಂದು ಇರಿಸಲಾಗಿತ್ತು. ಆದರೆ, ಪ್ರಧಾನಿ ಮೋದಿ ವೇದಿಕೆಯನ್ನು ತಲುಪಿದ ತಕ್ಷಣ, ತ್ರಿವರ್ಣ ಧ್ವಜವು ನೆಲದ ಮೇಲೆ ಬಿದ್ದರುವುದನ್ನು ನೋಡಿ ಅದನ್ನು ಹೆಕ್ಕಿ ತಮ್ಮ ಜೇಬಿಗೆ ಹಾಕಿದರು. ಪ್ರಧಾನಿ ಮೋದಿ ಹೀಗೆ ಮಾಡುತ್ತಿರುವುದನ್ನು ನೋಡಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಸದಸ್ಯ ರಾಷ್ಟ್ರಗಳ ಧ್ವಜಗಳನ್ನು ಇರಿಸಲಾಗಿರುವ ವೇದಿಕೆಯಿಂದ ದಕ್ಷಿಣ ಆಫ್ರಿಕಾದ ರಾಷ್ಟ್ರಧ್ವಜವನ್ನು ಎತ್ತಿಕೊಂಡರು.
- Rashmi Kallakatta
- Updated on: Aug 23, 2023
- 10:50 pm
ಚಂದ್ರಯಾನ-3 ಮಿಷನ್ ಯಶಸ್ವಿಗೆ ದೇಶ ವಿದೇಶಗಳ ಗಣ್ಯರಿಂದ ಅಭಿನಂದನೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಂನ ಸಾಫ್ಟ್ ಲ್ಯಾಂಡಿಂಗ್ನೊಂದಿಗೆ, ಭಾರತವು ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಸೇರಿಸಿದೆ. ಇದು ಒಂದು ಹೆಗ್ಗುರುತು ಸಾಧನೆ. 1.4 ಶತಕೋಟಿ ಜನರಿಗೆ ಒಂದು ಮಹತ್ವದ ಸಂದರ್ಭವಾಗಿದ್ದು, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ದೇಶವಾಗಿದೆ. ಈ ಯಶಸ್ಸು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
- Rashmi Kallakatta
- Updated on: Aug 23, 2023
- 10:27 pm
Chandrayaan-3: ಸಂವಹನ ನಡೆದಿದೆ; ಚಂದ್ರನಲ್ಲಿ ಇಳಿದ ನಂತರ ಮೊದಲ ಚಿತ್ರ ಹಂಚಿಕೊಂಡ ವಿಕ್ರಮ್ ಲ್ಯಾಂಡರ್
ಭಾರತವು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಯಶಸ್ವಿ ಸ್ಪರ್ಶದ ನಂತರ, ಲ್ಯಾಂಡರ್ ರೋವರ್ ಅನ್ನು ನಿಯೋಜಿಸುತ್ತದೆ. ಇಸ್ರೋ ವಿಜ್ಞಾನಿಗಳು ಮುಂದಿನ 14 ದಿನಗಳವರೆಗೆ ಚಂದ್ರನ ಮಣ್ಣು ಮತ್ತು ಬಂಡೆಗಳ ಸಂಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯೋಗಗಳ ಸರಣಿಯನ್ನು ನಡೆಸುತ್ತಾರೆ. ದಕ್ಷಿಣ ಧ್ರುವದಲ್ಲಿ ಐಸ್ ನಿಕ್ಷೇಪಗಳು ಮತ್ತು ಖನಿಜಗಳು ಇರುತ್ತವೆ ಎಂದು ನಿರೀಕ್ಷಿಸಲಾಗಿದೆ.
- Rashmi Kallakatta
- Updated on: Aug 23, 2023
- 9:30 pm
ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ನ್ಯೂಯಾರ್ಕ್ ಟೈಮ್ಸ್ನ ಕಾರ್ಟೂನ್
2014 ರಲ್ಲಿ ಭಾರತವು ಮಂಗಳಯಾನ ಮಿಷನ್ ಅಡಿಯಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳವನ್ನು ತಲುಪಿದ ಮೊದಲ ರಾಷ್ಟ್ರವಾಗಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಸೆಪ್ಟೆಂಬರ್ 2014 ಐತಿಹಾಸಿಕ ಕ್ಷಣವಾಗಿತ್ತು. ರೋಸ್ಕಾಸ್ಮಾಸ್ (ರಷ್ಯಾ), ನಾಸಾ (ಯುಎಸ್ಎ) ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (22 ಯುರೋಪಿಯನ್ ಸದಸ್ಯ ರಾಷ್ಟ್ರಗಳು) ನಂತರ ಮಂಗಳಯಾನ (ಮಾರ್ಸ್ ಆರ್ಬಿಟರ್) ನೊಂದಿಗೆ ಮಂಗಳವನ್ನು ತಲುಪಿದ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಭಾರತದ ಇಸ್ರೋ ಆಗಿದೆ.
- Rashmi Kallakatta
- Updated on: Aug 23, 2023
- 8:46 pm