ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್ಬದ ಖರೀದಿಗೆ ಮುಗಿಬಿದ್ದ ಜನ

ಹೂವು, ಹಣ್ಣು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಂತೆ ಮೈಸೂರಲ್ಲೂ ಎಲ್ಲ ವಸ್ತುಗಳು ದುಬಾರಿ. ಖರೀದಿಗೆ ಬಂದಿರುವ ಜನ ಚೌಕಾಶಿ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಾರ್ಗೇನಿಂಗ್ ಮಾಡುತ್ತಾರೆ ಅಂತ ವ್ಯಾಪಾರಿಗಳಿಗೂ ಗೊತ್ತು. ಅದನ್ನು ಸರಿದೂಗಿಸುವ ಹಾಗೆಯೇ ಅವರು ದರ ಹೇಳಿರುತ್ತಾರೆ!

ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್ಬದ ಖರೀದಿಗೆ ಮುಗಿಬಿದ್ದ ಜನ
| Updated By: Vimal Kumar

Updated on: Sep 19, 2023 | 1:48 PM

ಮೈಸೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೆ ಆರ್ ಮಾರ್ಕೆಟ್ ನಷ್ಟೇ (KR Market) ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದೇವರಾಜ ಮಾರ್ಕೆಟ್ (Devaraja Market) ಫೇಮಸ್. ಹಬ್ಬದ ದಿನ ಬಿಡಿ, ಬೇರೆ ದಿನಗಳಲ್ಲೂ ದೇವರಾಜ ಮಾರ್ಕೆಟ್ ಗಿಜಿಗುಡುತ್ತಿರುತ್ತದೆ. ಇವತ್ತು ವರಮಹಾಲಕ್ಷ್ಮಿ ಹಬ್ಬ (Varamahalakshmi Habba). ಬೆಂಗಳೂರಿನ ಕೆಅರ್ ಮಾರ್ಕೆಟ್ ನಲ್ಲಿ ನಿನ್ನೆ ವ್ಯಾಪಾರ ಹೇಗಿತ್ತು ಅಂತ ವಿಡಿಯೋ ತೋರಿಸಿದೆವು. ದೇವರಾಜ ಮಾರ್ಕೆಟ್ ನಲ್ಲಿ ಗುರುವಾರ ವ್ಯಾಪಾರ ಹೇಗಿತ್ತು ಅಂತ ಗೊತ್ತಿಲ್ಲ, ಆದರೆ ಇವತ್ತು ಅಲ್ಲಿ ಜನ ಜಾತ್ರೆ. ನಿನ್ನೆ ಕೆಲಸದ ದಿನವಾಗಿದ್ದರಿಂದ ಪ್ರಾಯಶಃ ಹೆಚ್ಚು ಜನ ಖರೀದಿಗಳಿಗೆ ಬಂದಿರಲಿಕ್ಕಿಲ್ಲ. ಇವತ್ತು ಪೂರ್ತಿ ಮೈಸೂರು ಜನ  ದೇವರಾಜ ಮಾರ್ಕೆಟ್ ನಲ್ಲಿ ಘೇರಾಯಿಸಿರುವ ಹಾಗೆ ಭಾಸವಾಗುತ್ತಿದೆ. ಹೂವು, ಹಣ್ಣು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಂತೆ ಮೈಸೂರಲ್ಲೂ ಎಲ್ಲ ವಸ್ತುಗಳು ದುಬಾರಿ. ಖರೀದಿಗೆ ಬಂದಿರುವ ಜನ ಚೌಕಾಶಿ ಮಾಡುತ್ತಿರುವುದನ್ನು ನೋಡಬಹುದು. ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಾರ್ಗೇನಿಂಗ್ ಮಾಡುತ್ತಾರೆ ಅಂತ ವ್ಯಾಪಾರಿಗಳಿಗೂ ಗೊತ್ತು. ಅದನ್ನು ಸರಿದೂಗಿಸುವ ಹಾಗೆಯೇ ಅವರು ದರ ಹೇಳಿರುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Fri, 25 August 23

Follow us
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ನಗುತ್ತಾ ಅರ್ ಅಶೋಕ ಮನೆಯೊಳಗಡೆ ಹೋದ ಎಸ್ ಟಿ ಸೋಮಶೇಖರ್ ಭುಸುಗುಡುತ್ತಾ ಹೊರಬಂದರು!
ನಗುತ್ತಾ ಅರ್ ಅಶೋಕ ಮನೆಯೊಳಗಡೆ ಹೋದ ಎಸ್ ಟಿ ಸೋಮಶೇಖರ್ ಭುಸುಗುಡುತ್ತಾ ಹೊರಬಂದರು!
ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು
ಇಟಲಿಗೆ ಹೋಗಿ ಮದುವೆ ಮಾಡಿಕೊಳ್ಳಬೇಕಿದ್ದ ವರ ಮಹಾಶಯನ ಪಾಸ್ ಪೋರ್ಟ್ ಅನ್ನು